Friday, July 29, 2011

Ramadhan Swagatha Program Kukikatte

Ramadhan Swagatha Program Kukikatte

ಉಡುಪಿ: ಜಲಾಯಿ ೨೬, ಮುಸಲ್ಮಾನರಲ್ಲಿ ರಮಝಾನಿನ ಮಹತ್ವವನ್ನು ನೆನಪಿಸಲು ಹಾಗೂ ಅದರ ಸಿಧತೆಗಾಗಿ ಜಮಾ‌ಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದವತಿಯಿಂದ ಉಡುಪಿಯ ಕುಕ್ಕಿಕಟ್ಟೆಯಲ್ಲಿ ರಮಝಾನ್ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಜಮಾ‌ಅತೆ ಇಸ್ಲಾಮೀ ಹಿಂದ್ ಇದರ ಸದಸ್ಯೆ ಮಲ್ಪೆ ಆಸೀಯ ಶರೀಫ್‌ರವರು ರಮಝಾನಿನ ವಿಶೇಷತೆ ಮತ್ತು ರಮಝಾನಿನ ಮಹತ್ವವನ್ನು ಬಹಳ ಮನದಟ್ಟಾಗಿ ತಿಳಿಯಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬೋಡ್ ಆಫ್ ಇಸ್ಲಾಮಿಕ್ ಎಜುಕೇಶನ್ ೨೦೧೦-೧೧ ರ ಸಾಲಿನ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ೨ನೇ ರ‍್ಯಾಂಕ್ ಗಳಿಸಿದ ಕುಕ್ಕಿಕಟ್ಟೆಯ ಸಮೀನ ನಝೀರ್ ಇವರನ್ನು ಆಸಿಯ ಶರೀಫ್‌ರವರು ಬಹುಮಾನ ನೀಡಿ ಅಭಿನಂದಿಸಿದರು.

ಅಫ್ರೀನ್ ಬಾನು ಕುಕ್‌ಆನ್ ಪಠಿಸಿದರು, ನಾಝಿಮ ನಝೀರ್ ಪ್ರಾಸ್ತಾವಿಕ ಹಾಗೂ ಭಾಷಣ ಮಾಡಿದರು, ಶಾಹಿದ ಕುಕ್ಕಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು ಸಮೀನಾ ನಝೀರ್ ದನ್ಯವಾದವಿತ್ತರು. ಜಿ.ಐ.ಓ ಸದಸ್ಯೆ ಖತೀಜ ಹುದಾ ಉಪಸ್ಥಿತರಿದ್ದರು.



No comments:

Post a Comment