Wednesday, January 13, 2010

Essay compitition. Priz distrebution.(Capitalism & imperialism campaign jamate islami hind udupi)

                         ಬಂಡವಾಳಶಾಹಿ ಸಾಮ್ರಾಜ್ಯತ್ವದ ವಿರುದ್ಧ ರಾಷ್ಟ್ರೀಯ ಅಬಿಯಾನ ಬಹುಮಾನ ವಿತರಣೆ.
ಉಡುಪಿ: ಜಮಾಅತೆ ಇಸ್ಲಾಮೀ ಹಿಂದ್, ಉಡುಪಿ ಜಿಲ್ಲಾ ಮಟ್ಟದಲ್ಲಿ ಪದವಿ ಪೂರ್ವ ತರಗತಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಮಂಗಳೂರು ಯೂತ್ವಿಂಗ್ನ ಜ| ಅಬ್ದುಲ್ ಗಫೂರ್ರವರು, ಭಾರತದ ನೆಲ, ಜಲ ಮತ್ತು ಇತರ  ನೈಸಗರ್ಿಕ ಸಂಪತ್ತುಗಳ ಮೇಲೆ ವಿದೇಶೀ ಪ್ರಭುತ್ವ, ಮತ್ತು ವಿದೇಶೀ ಸಂಸ್ಕೃತಿಯ ಪ್ರಭಾವದಿಂದ ಭಾರತವು ತನ್ನ ಸ್ವಂತಿಕೆಯನ್ನು ಕಳೆದುಕೊಂಡು, ಪರೋಕ್ಷವಾಗಿ ವಿದೇಶೀ ದಾಸ್ಯದತ್ತ ಸರಿಯುತ್ತಿದೆಯೆಂದೂ, ಹೆಣ್ಣಿನ ಶೋಷಣೆ ಮತ್ತು ಮಾದ್ಯಮಗಳ ಕಾಳಭಿರುಚಿಯ ಪ್ರಸಾರಗಳಿಂದ ನೈತಿಕ ಅದಃಪತನದತ್ತ ದೇಶವು ಸಾಗುತ್ತಿದೆ ಎಂದೂ, ಈ ಬಗ್ಗೆ ಭಾರತೀಯರು ಈಗಿನಿಂದಲೇ ಜಾಗೃತರಾಗಬೇಕೆಂದು ಹೇಳಿದರು.
    ಪ್ರಬಂಧ ಸ್ಪಧರ್ೆಯಲ್ಲಿ ಕು| ಜಯಲಕ್ಷ್ಮೀ, ಕೋಡಿಕನ್ಯಾನ ಸರಕಾರಿ ಜೂನಿಯರ್ ಕಾಲೇಜು(ಪ್ರಥಮ), ಕು| ಸಂತಸ, ಪಿ.ಪಿ.ಸಿ ಉಡುಪಿ(ದ್ವಿತೀಯ) ಮತ್ತು ಕು| ವಿನಯಾ ಶೆಟ್ಟಿ( ಹಿಂದೂ ಜೂನಿಯರ್ ಕಾಲೇಜು ಶಿರ್ವ(ತೃತೀಯ) ಬಹುಮಾನ ಗಳಿಸಿದರು
   
   
    ಮೌಲಾನ ಮುಹಮ್ಮದ್ ಆದಂ ಹೂಡೆಯವರು ಕುರ್ಆನ್ ಪಠಿಸಿದರು. ಯು.ಅನ್ವರ್ ಅಲಿ ಕಾಪು (ಜಿಲ್ಲಾ ಕಾರ್ಯದಶರ್ಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ) ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಫೀ ಅಹ್ಮದ್ ಕಾಪು ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ರಹಿಮಾನ್ ರಫೀಕ್ ಮಲ್ಪೆ (ಅಭಿಯಾನ ಸಂಚಾಲಕರು) ವಂದಿಸಿದರು.
http://www.kemmannu.com/news/index.asp?id=6265

http://mangalorean.com/news.php?newstype=local&newsid=164026

http://www.sahilnews.org/kannada/south_canara_dist_news/udupi/4493.html

http://www.megamedianews.in/13.01.10youthWing.htm

Womens Conference- Anti Capitalist Imperialism Campaign“save the country from slavery and poverty”


ದೇವಾಜ್ಞೆ ಯ ಅನುಸರಣೆ ಬಡವರ ಶೋಳಣೆಗೆ ಮುಕ್ತಿ - ಶಮೀರ ಜಹಾನ್
ಉಡುಪಿ : ಡಿ.20 ಫರೋವ ಚಕ್ರವತರ್ಿ ತನ್ನ ಅಧಿಕಾರ ಬಲದಿಂದ ದೇಶವನ್ನು ಬಡ-ಶ್ರೀಮಂತರೆಂಬುದಾಗಿ
ಇಬ್ಭಾಗ ಮಾಡಿ, ಬಡವರನ್ನು ಗುಲಾಮರನ್ನಾಗಿ ಮಾಡಿದಾಗ ಸೃಷ್ಟಿಕರ್ತನು ಆತನನ್ನು ಶಿಕ್ಷಿಸಿ ಆತನ ಶವವನ್ನು
ಮುಂದಿನ ಜನಾಂಗಕ್ಕೆ ನದರ್ಶನವನ್ನಾಗಿ ಮಾಡಿದ್ದನ್ನು ಕಾಣಬಹುದು. ಕೇವಲ ದೇವ ಭಯ, ದೇವಾಜ್ಷೆಯ
ಅನುಸರಣೆ ಮಾತ್ರ ನಮ್ಮನ್ನು ಈ ಗುಲಾಮಗಿರಿಯಿಂದ ಮುಕ್ತಿಗೊಳಿಸಬಹುದು ಎಂದು ಬಂಡವಾಳಶಾಹಿ ಸಾಮ್ರಾಜ್ಯತ್ವ
ವಿರೋಧಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಜಾಮಿಯಾ ಮಸೀದಿ ಉಡುಪಿಯಲ್ಲಿ ಆಯೋಜಿಸಿದ ಮಹಿಳೆಯರ
ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕಿ ಶಮೀರ ಜಹಾನ್ ಮಾತನಾಡಿದರು.
ಇನ್ನೋರ್ವ ಅತಿಥಿ ರಕ್ಷಿಂದಾ ಬಟ್ಕಳ್ರವರು ಮಾತನಾಡುತ್ತಾ ಇಂದು ಸಮಾಜದಲ್ಲಿ ಶೈತಾನನ ಅನುಸರಣೆ
ಮಾಡುವವರು ಮಾತ್ರ ಗೌರವಾನ್ವತರಾಗುತ್ತಿದ್ದಾರೆ. ಇಸ್ಲಾಮ್ ಶಾಂತಿಯ ಧರ್ಮ, ಪ್ರವಾದಿಯವರು ಇಸ್ಲಾಮನ್ನು
ಜಗತ್ತಿನ ಮೂಲೆ ಮೂಲೆಗೆ ಶಾಂತಿಯ ಮಾರ್ಗವಾಗಿ ಪಸರಿಸಿದರು. ಈ ನಟ್ಟಿನಲ್ಲಿ ನಮ್ಮ ಕಾರ್ಯ ಜನರನ್ನು
ಶಾಂತಿಯೆಡೆಗೆ ದೇವಭಯದೊಂದಿಗೆ ಜೋಡಿಸುವುದಾಗಿದೆ. ಅಂತಹ ಕಾರ್ಯ ನಮ್ಮಿಂದ ಸಾಧ್ಯವಾಗಲಿ ಎಂದು
ಹಾರೈಸಿದರು

   .
    ವಾಜಿದಾ ತಬಸ್ಸುಮ್ ರ ಕುರ್ಆನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಲ್ಸೂಮ್ ಅಬೂಬಕ್ಕರ್
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಮಾಡಿದರು. ಸಾಬಿರಾ ಸಿರಾಜ್ ಧನ್ಯವಾದವನ್ನತ್ತರು.